ರಂಗಪ್ರವೇಶ

ಹೊತ್ತು ಮೀರುತ್ತಿದೆ
ಇನ್ನೇನು ಈಗಲೋ ಆಗಲೋ
ತೆರೆ ಮೇಲೇಳುವ ಸಮಯ!
ಗಿಜಿಗುಡುತಿದೆ ಸಭಾಂಗಣ
ಸುತ್ತ ಹಬ್ಬಿದೆ ಮಬ್ಬು!

ಸಾಕಿನ್ನು ಮೇಲೇಳು
ಮುಗಿದಿಲ್ಲವೇ ಇನ್ನೂ ಪ್ರಸಾಧನ?
ತುಟಿಬಣ್ಣ ಒಂದಿನಿತು ಢಾಳಾಯ್ತು
ಕೆನ್ನೆಗಿನ್ನೊಂದಿಷ್ಟು ಕೆಂಪಿದ್ದರಾಗಿತ್ತು!
ಸರಿಪಡಿಸು ಸುಕ್ಕಾದ ಸೀರೆ ನೆರಿಗೆ

ಕಾದಿದೆ ರಂಗಸ್ಥಳ
ನಿನ್ನ ಪ್ರಥಮ ಪ್ರವೇಶಕ್ಕೆ
ಎದೆ ಢವಢವಿಸುತಿದೆಯೆ?
ಹೊದೆದುಕೋ ನಗೆಯ ಸೆರಗ
ಬಚ್ಚಿಡು ಕಣ್ಣಂಚಿನ ಕಂಬನಿಯ!

ಕಿವಿತೂತಾಗಿಸುವ ಕರತಾಡನಕೆ
ಮೈ ಜುಮ್ಮೆನಿಸುವ ಶಿಳ್ಳಿಗೆ
ಸಮೂಹದ ಕಟುಟೀಕೆಗೆ
ಬೆಚ್ಚೀಯ ಮತ್ತೆ!
ಅದೆಲ್ಲಾ ಇಲ್ಲಿ ಮಾಮೂಲೇ!

ಅದೋ ತೆರೆ ಏಳುತಿದೆ
ನಿನ್ನೆಡೆಗೆ ಬೆಳಕು ಹೊರಳುತಿದೆ
ವಾದ್ಯ ಮೊಳಗುತಿದೆ
ಎಲ್ಲಾ ಸಿದ್ಧವಾಯ್ತಲ್ಲಾ?
ನಡೆ ಇನ್ನು ರಂಗಸ್ಥಳಕೆ!

ಅಭಿನಯದ ಅಮಲಿನಲಿ
ಮತ್ತೇರಿ ಬೀಳುವೆಯೋ?
ಅಟ್ಟಹಾಸದ ನಗೆಗೆ ತಾಳತಪ್ಪುವೆಯೋ?
ಗೆಲ್ಲುವೆಯೋ? ಸೋಲುವೆಯೋ?
ಕಾಲ ಕಾಯುತ್ತಿದ್ದಾನೆ ದಾಖಲಿಸಲು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿತೆ
Next post ಮಾಧವಿಯ ವ್ಯಥ ಕಥೆ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys